Friday, 29 April 2011

ನಿಮ್ಮ ಪ್ರಕೃತಿ ಸ್ವಭಾವ ಯಾವುದು ಎಂದು ನೀವೇ ತಿಳಿದುಕೊಳಿರಿ...!!

     ಆಯುರ್ವೇದಲ್ಲಿನ ತ್ರಿದೋಷಗಳನ್ನೂ ನೀವು ತಿಳಿದಿದ್ದೀರಿ.ಅವು ವಾತ,ಪಿತ್ತ, ಕಫ .  ಆಯುರ್ವೇದದಲ್ಲಿ  ಈ ತ್ರಿದೋಷಗಳ  ಆದಾರದ ಮೇಲೆ ರೋಗಿಗಳ ರೋಗವನ್ನು ಕಂಡು ಹಿಡಿಯುತ್ತಾರೆ.ನಿಮ್ಮ ಪ್ರಕೃತಿ ಸ್ವಭಾವ ತಿಳಿಯಬೇಕೆ ..? ಹಾಗಾದರೆ  ಮುಂದೆ  ಓದಿ .....

                                                   ವಾತಜ  ಪ್ರಕೃತಿ      

  • ಕೂದಲುಗಳು ಒಡಕಾಗಿರುತ್ತವೆ.ಯಾವಾಗಲು ಒಣಗಿಕೊಂಡಿರುತ್ತವೆ.ತುಸು ಬುಡು ಬಣ್ಣದ್ದಾಗಿರುತ್ತವೆ.
  • ಯಾವಾಗಲು ಬಿಸಿಯಾದ ಪದಾರ್ಥಗಳಲ್ಲಿ ಇಚ್ಛೆ .ತಂಪು ಪದಾರ್ಥಗಳಲ್ಲಿ ದ್ವೇಷ .
  • ಧೀ,ಸ್ಮೃತಿ ,ಧೃತಿ ಅಸ್ಥಿರವಾಗಿರುತ್ತವೆ.ವಿಷಯಗಳನ್ನು ಗ್ರಹಿಸಬಲ್ಲರು ಆದರೆ ಶೀಘ್ರವಾಗಿ ಅವನ್ನು ಮರೆತು ಬಿಡುತ್ತಾರೆ.
  • ಅಧಿಕ ಚೇಷ್ಥೆಗಳು,ಅಸ್ಥಿರವಾದ ಮೈತ್ರಿ ಮತ್ತು ಕೆಲಸ ಕಾರ್ಯಗಳು ,ಅಧಿಕಮಾತು.
  • ಹಣ ,ಬಲ ಮತ್ತು ನಿದ್ರೆ ಕಡಿಮೆ
  • ಮಾತು ತಡೆದು ತಡೆದು ಬರುತ್ತವೆ.ವಾಣಿ ವಡಕಾಗಿರುತ್ತವೆ.
  • ಹೆಚ್ಚು ತಿನ್ನುವವರು,ವಿಲಾಸಿ ಜೀವನ ಬಗ್ಗೆ ಆಸಕ್ತಿ.
  • ನಾಸ್ತಿಕ,ದೇವರಲ್ಲಿ ಹಾಗು ಇತರರಲ್ಲಿ ನಂಬಿಕೆ ಇಲ್ಲದವನು/ದವಳು.
  • ಸಂಗಿತ,ಹಾಸ್ಯ ,ಬೇಟೆ ,ಸಾಹಸ ಮತ್ತು ಜಗಳಗಳಲ್ಲಿ ಆಸಕ್ತಿ .
  • ಸಿಹಿ,ಹುಲಿ ಮತ್ತು ಉಪ್ಪು ಈ ರುಚಿಗಳಲ್ಲಿ ಪ್ರೀತಿ.
  • ಉದ್ದವಾದ ಮತ್ತು ತೆಳ್ಳಗಿನ ಶರೀರ .
  • ನಡೆದಾಡುವಾಗ ಉಂಟಾಗುವ ಶಬ್ದ ಹೆಚ್ಚು.
  • ಇವರು ತಮ್ಮ ಕನಸುಗಳಲ್ಲಿ ಬೆಟ್ಟಗುಡ್ಡಗಳಲ್ಲಿ ಸಂಚರಿಸುವರು.ಆಕಾಶದಲ್ಲಿ ಹಾರಾಡುವರು.ಮರಗಳನ್ನು ಇರುವರು.                                             ಅಧಿಕ ಹಸಿವು ಬಾಯಾರಿಕೆಗಳಿಂದ ಕುಡಿರುವವರು.
    ಪಿತ್ತಜ ಪ್ರಕೃತಿ
  • ಗೌರವರ್ಣದವರು .ಯಾವಾಗಲು ಬಿಸಿಯಾಗಿರುತ್ತಾರೆ.
  •  ಶೂರ,ಅಭಿಮಾನಿ ಕೆಂಚು ಬಣ್ಣದ ತಲೆ ಕೂದಲುಗಳು .
  • ಮಾಲೆ,ಆಭರಣಗಳು,ಸೌದರ್ಯ ವರ್ಧಕಗಳು ಅಧಿಕ ಆಸಕ್ತಿ.
  • ಸಚ್ಚಾರಿತ್ರ್ಯ ಪ್ರಿಯ ಮತ್ತು ತನ್ನ ಆಶ್ರಿತರಿಗೆ ಸದಾ ಮೆಚ್ಚಿನವರು .
  • ಅಧಿಕ ಸಾಹಾಸ್ ,ಬುದ್ಧಿ ಮತ್ತು ಬಲಗಳಿಂದ ಕೂಡಿದವರು.
  • ಶರೀರದ ಗಂಟುಗಳು ಭದ್ರವಾಗಿರುವುದು .ಮಾಂಸ ಕಡಿಮೆ.
  • ಸಂಕಟ  ಕಾಲದಲ್ಲಿ ಶತ್ರುಗಳನ್ನು ರಕ್ಷಿಸುವರು.
  • ತಣ್ಣಗಾದ ಆಹಾರದಲ್ಲಿ ಇಚ್ಛೆ.ಸಿಹಿ,ಒಗರು ಮತ್ತು ಕಹಿ ಭಕ್ಷ್ಯ ಭೋಜ್ಯಗಳು ಇವರಿಗೆ ಇಷ್ಟ.
  • ಬಿಸಿಲೆಮ್ದರೆ ಆಗದು,ಬಹಳ ಬೆವರುವರು.
  • ಇವರ ಆಯುಷ್ಯ ಮತ್ತು ಬಳಗಳು ಮಧ್ಯಮ ಪ್ರಮಾಣದ್ದು.
  • ಇವರ ಕನಸುಗಳಲ್ಲಿ-ಹೊ೦ ಬಣ್ಣದ ದೃಶ್ಯಗಳು,ಹಳದಿ ಹೂಗಳು,ಉರಿಯುತ್ತಿರುವ ಸೌಧಿಗಳು,ಸೂರ್ಯ ಇತ್ಯಾದಿ ಹೆಚ್ಚು ಬೀಳುತ್ತವೆ

                         ಕಫಜ ಪ್ರಕೃತಿ
  • ಸೌಮ್ಯ ಸ್ವರೂಪ
  • ಹಸಿವೆ,ಬಾಯಾರಿಕೆ,ಕ್ಲೇಷಗಳಿಗೆ ಇವನು ಅ೦ಜಲಾರ.
  • ಸತ್ಯವಾದಿ,ಬುದ್ಧಿಶಾಲಿ.
  • ದಟ್ಟವಾದ ಕಡು ನೀಲಿ ಮಿಶ್ರಿತ ಕಪ್ಪು ಕೂದಲು .
  • ಇವನಿಗೆ ಸಂತಾನ,ಧನ,ಧಾನ್ಯ,ಸೇವಕರು ಇತ್ಯಾದಿ ಎಲ್ಲವು ಹೆಚ್ಚು.
  • ಇವರ ವೈರಾವು ಗುಪ್ತವಾಗಿದ್ದು,ಬಹಕಾಳದವರೆಗೆ ದ್ವೇಷವನ್ನು ಮರೆಯದವರು.
  • ಇವರು ಮಾತಾಡುವುದು,ತಿನ್ನುವುದು ಕಡಿಮೆ.
  • ಆಯುಷ್ಯ-ಸುದೀರ್ಘ,ಹಣಕಾಸು ಹೇರಳ.
  • ದಾನಶಿಲ,ಉದಾತ್ತ ಚಿಂತಕ,ಗಂಭೀರ.ಕ್ಷಮಾಶೀಲ.
  • ಇವರ ಮೈತ್ರಿ ಗಾಢವಾದುದು.
  • ಧರ್ಮಾತ್ಮ ,ಎಂದು ಕೇಡು ನುಡಿಯದವರು.
  • ಇವರ ಮಾತು ಸಮುದ್ರದ ಬೋರ್ಗರೆತವನ್ನು ಹೋಲುವುದು,ಬಾಲ್ಯದಿಂದ ಸಹನಾಶೀಲರು.
  • ಅಳುವುದಾಗಲಿ,ಆಸೆಬುರುಕುತನವಾಗಲಿ ಇವರಿಂದ ದೂರ.     
              ಆದರೆ ಸಮಪ್ರಕೃತಿ ಎಲ್ಲಕ್ಕಿಂತ  ಒಳ್ಳೆಯದು.  ನಿಮ್ಮ ಸ್ವಭಾವ ನೀವು ಬಲ್ಲಿರಿ.ಆ  ಸ್ವಭಾವಗಳ ಆದಾರ
ಮೇಲೆ ನಿಮ್ಮ ಪ್ರಕೃತಿ ಯಾವುದೆಂದು ನೀವೇ ತಿಳಿಯಿರಿ.ಈ ವಿಷಯವನ್ನು ಹೇಳಿದ್ದು ನನ್ನ ಆಯುರ್ವೇದ ಗುರುಗಳು.
             
                                                                                               
               
                                                                     

No comments:

Post a Comment