Sunday, 17 April 2011

ಧಾರವಾಡದ ಗುಬ್ಬಚ್ಚಿಗಳು ಎಲ್ಲಿಗೆ ಹೋದವು ..........??


      


ನಮ್ಮ ಧಾರವಾಡದಲ್ಲಿ ಮೊದಲು ಮುಂಜಾವಿನ ಹೊತ್ತಿನಲ್ಲಿ ಗುಬ್ಬಚ್ಚಿಗಳ ಕಲರವ ಕೇಳುತ್ತಿತ್ತು.
  ಸಾಂಸ್ಕೃತಿಕ  ನಗರ ಸಂಗೀತಗಾರರ ನಗರ.ಅವರುಗಳಿಗೆ
ಪಕ್ಕದ ವಾದ್ಯಗಳ ತರಹ ಈ ಗುಬ್ಬಚ್ಚಿಗಳ ಕಲರವ ಇತ್ತು.
      
       ಈಗ ಮಕ್ಕಳಿಗೆ ಗುಬ್ಬಚ್ಚಿಗಳನ್ನೂ ತೋರಿಸಲು ಹೊರ ನಡೆದರೆ
ಗುಬ್ಬಚ್ಚಿಗಳು ಇಲ್ಲ ,ಅದರ ಕಲರವೂ ಇಲ್ಲ .ಗುಬ್ಬಚ್ಚಿಗಳು ಮಂಗಮಾಯವಾಗಿ ಬಿಟ್ಟಿವೆ.
ಹಾಗಾದರೆ ಧಾರವಾಡದ ಗುಬ್ಬಚ್ಚಿಗಳು ಎಲ್ಲಿಗೆ ಹೋದವು.......?
ಅಂತರಿಕ್ಷಗಳ ಬಳಕೆಯಿಂದ ಕಡಿಮೆ ಆಗಿವೆ ಎಂಬುದು ತಿಳಿದ ವಿಷಯ ಆದರೂ ಅದು ನಿರ್ಧಿಷ್ಟ ಕಾರಣವಲ್ಲ.
ಅಂತರಿಕ್ಷದ ತಂರಗಗಳು ಕಾಲುಗಳನ್ನು  ಎಳೆದಂಥಾಗುತ್ತದೆ.ಇದರಿಂದ ಗುಬ್ಬಚ್ಚಿಗಳು ಏನೂ ಅಪಾಯ ಇದೆ ಎಂದು ಅದರ ಹತ್ತಿರ ಸುಳಿಯುವುದಿಲ್ಲ .ಇದರ ಪ್ರಭಾವದಿಂದ ಗುಬ್ಬಚ್ಚಿಗಳು ನಾಶವಾಗುವುದು ಕಡಿಮೆ ಎಂದು ಪರಿಸರ ಪ್ರೇಮಿ ಪಂಡಿತ ಮುಂಜಿ ಹೇಳುತ್ತಾರೆ.
           "ನಮ್ಮ ಧಾರವಾಡದಲ್ಲಿ ಹಂಚಿನಮನೆ ಹೋಗಿ ಆರ್ ಸಿ ಸಿ ಮನೆಗಳು ಜಾಸ್ತಿ ಆಗುತ್ತಿವೆ.
ಹಾಗೆ ಮನೆಯ ಮುಂದೆ ಕಾಳು,ಕಡಿಗಳನ್ನು ಒಣಗಿಸುತ್ತಿದ್ದರು,ಸಂಗ್ರಹಿಸಿಡುತ್ತಿದ್ದರು.
ಈ ಕಾಲದಲ್ಲಿ ಕೃಷಿ ಕೆಲಸ ಮಾಡುವುದೇ ಅಪರೂಪ.ಏಕೆ ಇದನ್ನು ಹೇಳುತ್ತಿದ್ದೆನೆ ಎಂದು ಯೋಚಿಸುತ್ತಿರಾ......??
     ಗುಬ್ಬಚ್ಚಿಗಳು ಹಂಚಿನಮನೆಯಲ್ಲಿ ಮೇಲ್ಛಾವಣೆ ಹಂಚಿನ ಮಧ್ಯೆ ತನ್ನ ಸಂತಾನಾಭಿವೃದ್ಧಿ ಮಾಡುತ್ತವೆ.ಮನೆಯ ಮುಂದೆ ಬಿದ್ದಿರುವ ಕಾಳು ಕಡಿಗಳನ್ನು ತಿನ್ನುತ್ತಿದ್ದವು.ಈ ಆಹಾರದ ಕೊರತೆ,ಸಂತಾನಾಭಿವೃದ್ಧಿಗೆ ಸರಿಯಾದ ಸ್ಥಳದ ಅಭಾವದಿಂದ ಗುಬ್ಬಚ್ಚಿಗಳು ಕಮ್ಮಿವಾಗುತ್ತಿವೆ" ಎಂದು ಹೇಳುತ್ತಾರೆ ಪಂಡಿತ ಮುಂಜಿ ಅವರು. 

No comments:

Post a Comment